ಎಲ್ಲಿ ಹೋದುವೆಲ್ಲ ನಮ್ಮ ನೀತಿ ಪೇಳ್ವ ಕಥೆಗಳು
ಎತ್ತ ಸಾಗುತಿದೆ ಜಗ ನಮ್ಮ ನಿತ್ಯ ಪಯಣದಿ
ರಾಮ ಎಲ್ಲಿ, ಸೀತೆ ಎಲ್ಲಿ
ರಾಮ ಭಕ್ತ ಹನುಮನೆಲ್ಲಿ
ಭರತನನುಜ ಪ್ರೇಮವೆಲ್ಲಿ
ಮಮತೆ ಮೆರೆದ ಮಂಥರೆ
ಪತಿವ್ರತೆ ಮಂಡೋದರಿ
ಮಾತೃ ಭಕ್ತ ರಾವಣ
ಅಸುರ ಕುಲದ ವಿಭೀಷಣ
ದುಷ್ಟರಲ್ಲು ಒಳ್ಳೆ ಗುಣ
ಗೀತೆಸಾರ್ದ ಕೃಷ್ಣ ಎಲ್ಲಿ
ಕುಂತಿ ತನಯರೋದರೆಲ್ಲಿ
ಭೀಷ್ಮ ಎಲ್ಲಿ, ದ್ರೋಣರೆಲ್ಲಿ
ನೀತಿಸಾರ್ದ ಗುರುಗಳೆಲ್ಲಿ
ಗುರುವ ಮೀರ್ದ ಏಕಲವ್ಯರೆಕೋ ಇಂದು ಕಾಣರಿಲ್ಲಿ
No comments:
Post a Comment