ಊರ
ಮುಂದಣ ಗುಡಿಯ ಅರಳಿಯ ಮರ ಬೀಸಿ
ಕೇರಿ
ಒಳಗೆಲ್ಲ ತಂಗಾಳಿ|| ಸುಳಿದು
ಬೆಂದ
ಮನಕೆಲ್ಲ ತಂಪೆರೆದೋ
ಸ್ವಾಮಿ
ನಮ್ಮಪ್ಪನ ಕರುಣೆಯ ಕಣ್ಣಿಂದ
ಕಪ್ಪು
ಕತ್ತಲೆ ದೂರಾಗಿ|| ಜಗಕೆಲ್ಲ
ಹೊಳಪಿನ
ಬೆಳಕು ಇಳಿದಾವೊ
ನೀಲಿ
ಆಗಸದಲ್ಲಿ ತೇಲುತ ಸಾಗುವ
ಕಪ್ಪಾನೇ
ಮೋಡ ಭುವಿಗಿಳಿದು|| ಧರೆಯ
ಒಪ್ಪ
ಓರಣವಾಗಿ ತೊಳೆದಾವೋ
ಬೆಟ್ಟದ
ನೀರು ಬರಡಾದ ಭುವಿಗಿಳಿದು
ಊರ
ಮುಂದಣ ಕೆರೆತುಂಬಿ|| ಹರಿದು
ನೆಲವೆಲ್ಲ
ಹಸಿರುಕ್ಕಿ ನಗುತಾವೆ
ಜೀವ
ಕಾಯೂವ ಬೀರಪ್ಪನ ದಯೆಯಿಂದ
ರಗರಗ
ಸುಡುವ ಬೇಸಗೆ|| ಸರಿದೋಡಿ
ನಿಗಿಕೆಂಡ ನಗುವ ಹೂವಾದೊ
No comments:
Post a Comment