ಅಂದಾದ
ಮಂಡ್ಯಾದ ಚೆಂದಾದ ಬೀದೀಲಿ
ತುಂಬೀದ
ಮೆರವಣಿಗೆ ಬರುವಾಗ|| ಊರೊಳಗೆ
ತುಂಬೆ
ಹೂವರಳಿ ನಗುತಾವೆ
ಭಾರೀ
ರಕ್ಕಸರ ಶಿರಗಳ ಹಾರಿಸಿ
ತೂರಾಡಿ
ಕಾಳಮ್ಮ ಬರುವಾಗ|| ಏಳೂರ
ಮಾರೀರು
ಅವಳ ಜತೆಯಾದ್ರು
ಅನ್ಯಾಯಕಾರರ
ಮೆಟ್ಟಿ ಒಂಟಿಕಾಲಲ್ಲಿ
ಕುಂಟುತ್ತಾ
ಕಾಳಮ್ಮ ಬರುವಾಗ|| ನಮ್ಮೂರ
ನಂಟೆಲ್ಲಾ
ಒಂದಾದೋ
ಗರತೀರು
ಹಿಡಿದ ಆರತಿ ತಂಬಿಟ್ಟೀಗೆ
ಅವರ್ಕೆ
ಹೂವು ಕಣ್ಣಾಗಿ|| ತಾವು
ಜಗದ ಸೊಗಸೆಲ್ಲ ನೋಡ್ಯಾವೆ
No comments:
Post a Comment