ಭಾರತಮಾತೆಯ ಕೀರ್ತಿ ಕಳಸ
ನಾಡು ನಮಿಸಿದ ಪಾವನಾತ್ಮ
ಜನಾಭಿಮಾನದ ಕೇಂದ್ರ ಬಿಂದು
ಎಲ್ಲರ ಗೆಲ್ದ ಅಜಾತಶತ್ರು
ನೂರು ಸಂತರ ಮೀರ್ದ ನಗುವು
ಜಗದ ಏಳ್ಗೆಯ ಜ್ಞಾತ
ನಿಲುವು
ಮಾನವತ್ವವ ತೋರ್ದ ಗುರುವು
ಜ್ಞಾನ ಪಡೆದ ಶ್ರೇಷ್ಟ ಗೆಲುವು
ಮೇರು
ಶಿಖರವನೇರ್ದ ತಾಳ್ಮೆ
ಮನುಜ
ಪಥಕೆ ತುಡಿದ ಒಲುಮೆ
ಕೇಡ
ಬಗೆಯದ ದಿವ್ಯ ದೃಷ್ಟಿ
ದೇಶ
ಪಡೆದ ಪುಣ್ಯ ಸೃಷ್ಟಿ
ಸರಳ
ಬಾಳ್ವೆಯ ಸಾಹುಕಾರ
ಕ್ಷಿಪಣಿ
ತಂತ್ರದ ನೇತಾರ
ಎಲ್ಲರೊಲುಮೆಯ
ನಿಜ ಹರಿಕಾರ
ಸಂಸ್ಕೃತಿಯ
ಬೆಸೆದ ನೇಕಾರ
No comments:
Post a Comment