ಕಾವ್ಯದ ತಿರುಳು

ಕವಿ ಬರೆದ ಕಾವ್ಯದೊಳೇನಿಲ್ಲ ?
ಸರಸತಿಯ ಒಲವುಂಟು
ಶೃಂಗಾರ ಚೆಲುವುಂಟು
ತಾಯ ಮಮತೆಯ ನಲವುಂಟು
ಮೇರೆ ಮೀರ್ದ ಸಾತ್ವಿಕದ ಬಲವುಂಟು

ಬಿರಿದ ಕುಸುಮಗಳ ಘಮಲುಂಟು
ರಸಿಕತೆಯ ಅಮಲುಂಟು
ಕಂದನಾಡುವ ತೊದಲುಂಟು
ಮಿಗಿಲಾಗಿ ನಾಡಪ್ರೇಮವು ಮೊದಲುಂಟು

ಬತ್ತದ ಭಾವನೆಗಳಲ್ಲುಂಟು
ಚಿತ್ತದ ತಳಮಳಗಳಲ್ಲುಂಟು
ಹೊತ್ತಿ ಉರಿವ ರೋಷಾಗ್ನಿಗಳ ಅಳಲುಂಟು
ಮಿಕ್ಕುಮೀರಿ ಹರಿವ ಮನದ ತೊಳಲಾಟವಲ್ಲುಂಟು

No comments:

Post a Comment