ವಂದನೆ ಅಭಿವಂದನೆ
ಅದಿಕಾವ್ಯದ ಸೃಜನನೆ
ನಮಿಪೆ ನಿಮಗೆ ಭರತಖಂಡದ ಪ್ರಥಮ
ಕವಿಯೇ
ಬರೆದೆ ಮುನ್ನುಡಿ ಕವಿಯ
ಕುಲಕೆ
ಹೊಳೆವ ಮಣಿಯು ಕಾವ್ಯ ಮುಕುಟಕೆ
ಮಡಿದ ಕ್ರೌಂಚಕೆ ಮಿಡಿದ ಋಷಿಯೆ
ಮಹತ್-ಕಾವ್ಯವ ಬರೆದ ಮುನಿಯೆ
ಲೋಕಮಾತೆಯ ಶೋಕ
ಕಳೆದು
ನೊಂದಸೀತೆಗೆ
ಆಸರೆಯನೆರೆದು
ರಾಮಸುತರ ಸಾಕಿ
ಸಲಹಿದೆ
ದಿವ್ಯಪ್ರೇಮದಿ
ಹರಸಿ ಬೆಳೆಸಿದೆ
ವಿಶ್ವಪೂಜಿತ
ಗ್ರಂಥದಾಕರ
ವಲ್ಮೀಕದೊಡಲ
ಅಮರ ಸಂತ
ಹಾಡಿಹೊಗಳಿದೆ
ರಾಮ ಚರಿತೆಯ
ಜಗಕೆ ಅರುಹಿದೆ
ಪುರುಷೋತ್ತಮನ ಕಥೆಯ
No comments:
Post a Comment