ಚರ್ವಿತಚರ್ವಣ
ಚಹರೆಯೊಳಿಲ್ಲ
ಚಿಂತಾಕ್ರಾಂತ
ಛಾಯೆಗಳಿಲ್ಲ
ಆಲೋಚನಾ ರಚಿತ
ವ್ಯೂಹಗಳಿಲ್ಲ
ಕಾಣೆನು ಉಲಿವುದೊ
ರಾಮಾಯಣವ
ಅರಿಯೆನು ಬೆರೆವುದೋ
ತಾ ಭಾರತವ
ಗ್ರಹಿಸೆನು
ಸಾರ್ವುದೊ ಗೀತೆಯ ಸಾರ
ದೈವತ್ವದೆಡೆಗೆ
ನಡೆದೋಡುವುದೋ
ರಕ್ಕಸತನಕೆ
ಎಡತಾಕುವುದೋ
ಸಂತರ ತೆರದಿ
ಕಾಮನೆ ಗೆಲುವುದೊ
ನಗುತಲಿ ಮಗುವು ಮಲಗಿದೆ ಇಲ್ಲಿ
ತಿಳಿಗಣ್ಣಲಿ ಜಗವನು ನೋಡುತಲಿ||
No comments:
Post a Comment