ಬಾಹುಬಲಿ

ವಿಂಧ್ಯಗಿರಿಯ ನೆತ್ತಿಯಲ್ಲಿ
ಧವಳಗೊಳದ ಎದುರಿನಲ್ಲಿ
ಕಲ್ಲನೊಡೆದು ಮೂಡಿದ
ಜಗಕೆ ಬೆಳಕು ನೀಡಿದ

ಭರತನನುಜ ಬಾಹುಬಲಿಯು
ತ್ಯಾಗಫಲವ ಸಾರುತ
ಆದಿನಾಥ ಸುತನು ನಿಂತ
ಎಲ್ಲರನ್ನು ಹರಸುತ

ಮೊಗದ ತುಂಬ ಮಂದಹಾಸ
ಸೂಸಿ ಅವನು ನಗುತಿಹ
ಕಾಂತಿಯುಳ್ಳ ನೋಟಬೀರಿ
ಶಾಂತಮೂರ್ತಿ ನಿಂತಿಹ

No comments:

Post a Comment