ಬೆಂದ ಕಾವ್ಯದ ಸಾಲೊಳಿತ್ತು
ನೊಂದ ನನ್ನ ಕವನ
ಹೆಕ್ಕಿ ತೆಗೆದು ರಾಗ ನೀಡಿದ
ನಿನಗೆ ನನ್ನ ನೂರು ನಮನ
ಎಂದೊ ಬರೆದ ಸಾಲು ಅದುವೇ
ಮರೆತೇ ಬಿಟ್ಟಿತ್ತು ಈ ಮನ
ಸಪ್ತ ಸ್ವರದಲಿ ಬೆರೆತು ಇಂದು
ಮರಳಿ ತಂದಿತು ಸಾಂತ್ವನ
ಜೀವ ಇಲ್ಲದ ಶವದ ತೆರದಿ
ಕಮರಿತ್ತೆನ್ನ ಮೈಮನ
ಹುರುಪಿನಿಂದ ನಲಿದೆ ಕೇಳಿ
ಜೀವ ತುಂಬಿದ ಗಾಯನ
ಯಾವ ದೇವಗೆ ಮುಗಿಯಲಿಂದು
ಮರಳಿ ಬಂದಿದೆ ಹೊಸ ಜೀವನ
ಮುಗಿದ ಬದುಕಿಗೆ ತಿರುವ ತಂದ
ನಿನ್ನ ಗೀತೆಯೆ ಪಾವನ
No comments:
Post a Comment