ಯಾತ್ರೆಗೋದ
ಯಜಮಾನಪ್ಪ ಸಂಗ ಕಟ್ಕೊಂಡು
ಪಾತ್ರೆಪಗ್ದೆ
ಉಣ್ಣಾಕ್ ತಿನ್ನಾಕ್ ಎಲ್ಲಾನ್ ತಕ್ಕಂಡು
ಮಾಂಸ ಮಡ್ಡಿ
ಜಿಡ್ಡು ಜೋಳ ಎಲ್ಲಾನ್ ತಿನ್ಕ0ಡು
ಕಾವೇರೀಲಿ ನಿಂದು,
ಯಮುನೆ ಚಿಮುಕುಸ್ಕ0ಡು
ಮೈಯ್ಯೀನ್ ಕೊಳೆ
ತಿಕ್ಕಿ ತೀಡಿ ಚೆನ್ನಾಗ್ ತೊಳ್ಕಂಡು
ಮನಸಲ್ಲಿರೋ
ಲೋಭಾಮೋಹನಂಗೇ ಇಟ್ಕ0ಡು
ಉಸಾರ್ ತಪ್ಪಿ
ಸತ್ತೋದ್ ಹೆಂಡ್ತಿ ಸಮಾಧಿ ಮಾಡ್ಬುಟ್ಟು
ಜೊತೇಲೋಗಿದ್
ನಾದ್ನಿ ಕತ್ತುಗ್ ತಾಳಿ ಕಟ್ಬುಟ್ಟು
ಮಾಡಿದ್ ತಪ್ಗೊಳ್ಗೆಲ್ಲ
ಸಾವ್ರಾರ್ ಹರಕೆ ಹೊತ್ಕಂಡು
ಪಾಪ-ಪುಣ್ಯ
ನೇಮ-ನಿಷ್ಠೆ ನದೀಲ್ ತೇಯ್ಕ0ಡು
ನಮ್ಮೂರೂನ್
ದೇವ್ರೇ ನಮಗೆ ದೊಡ್ಡು ಅನ್ಕಂಡು
ವಾಪಸ್ ಬಂದ
ಆಲ್ದಾಡಿ ಖಾಯ್ಲೇ ತಕ್ಕಂಡು
No comments:
Post a Comment